Wednesday, October 23, 2013

ಭದ್ರಗಿರಿ ಅಚ್ಯುತದಾಸರು ಇನ್ನಿಲ್ಲ

'ಕೀರ್ತನಕೇಸರಿ' ಸಂತ ಭದ್ರಗಿರಿ ಅಚ್ಯುತದಾಸರು ವಿಧಿವಶರಾಗಿದ್ದಾರೆ. 1997-98ರಲ್ಲಿ ಮೈಸೂರಿನಲ್ಲಿ ನಾನು ಐದು ಸಲ ಅವರ ಹರಿಕಥೆ ಕೇಳಿದ್ದೆ. ಆಕಾಶವಾಣಿಯಲ್ಲಿಯೂ ಅವರ ಹರಿಕಥೆಯನ್ನು ಅನೇಕ ಬಾರಿ ಕೇಳಿದ್ದೇನೆ. ಅವರ ಕೆಲವು ಕ್ಯಾಸೆಟ್ಟುಗಳು ನನ್ನ ಬಳಿ ಇವೆ. ಅವರದು ಮಧುರವಾದ ಕಂಠ. ಅವರ ಹರಿಕಥೆಗಳು ಪ್ರವಚನದಂತೆ ಇರುತ್ತಿದ್ದು ಅವರ ಪಾಂಡಿತ್ಯದ ದ್ಯೋತಕವಾಗಿದ್ದವು. ಅವರು ನನ್ನ ಅಚ್ಚುಮೆಚ್ಚಿನ ಹರಿಕಥಾ ವಿದ್ವಾಂಸರು. ಭದ್ರಗಿರಿ ಅಚ್ಯುತದಾಸರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:
https://kn.wikipedia.org/wiki/%E0%B2%AD%E0%B2%A6%E0%B3%8D%E0%B2%B0%E0%B2%97%E0%B2%BF%E0%B2%B0%E0%B2%BF_%E0%B2%85%E0%B2%9A%E0%B3%8D%E0%B2%AF%E0%B3%81%E0%B2%A4%E0%B2%A6%E0%B2%BE%E0%B2%B8%E0%B2%B0%E0%B3%81

No comments:

Post a Comment