Monday, January 21, 2019

ಅಂಬಿಗರ ಚೌಡಯ್ಯನ ವಚನಗಳು


ಕಂತೆ ತೊಟ್ಟವ ಗುರುವಲ್ಲ
ಕಾವಿ ಹೊತ್ತವ ಜಂಗಮನಲ್ಲ
ಶೀಲ ಕಟ್ಟಿದವ ಶಿವಭಕ್ತನಲ್ಲ
ನೀರು ತೀರ್ಥವಲ್ಲ ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯಿ ಮೇಲೆ
ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೇ ತೂಗಿ ತೂಗಿ
ಟೊಕಟಕನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ
ಕಟ್ಟಿದ ಲಿಂಗ ಕಿರಿದು ಮಾಡಿ
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟೆ ಮೂಳರ ಕಂಡಡೆ
ಮೆಟ್ಟಿದ ಎಡದ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ

ನನ್ನ ಕುಲ ಹೆಚ್ಚು ನಿನ್ನ ಕುಲ  ಕಡಿಮೆ
ಎಂದು ಹೊಡೆದಾಡುವ ಅಣ್ಣಗಳನ್ನು
ಹಿಡಿದು ಮೂಗನೇ ಸವರಿ
ಮೆಣಸಿನ ಹಿಟ್ಟು ತುಪ್ಪವ ತುಂಬಿ
ನಮ್ಮ ಪಡಿಹಾರಿ ಉತ್ತಣ್ಣನ ವಾಮ ಪಾದುಕೆಯಿಂದ
ಫಡಫಡನೆ ಹೊಡೆಯಬೇಕೆಂದ ನಮ್ಮ ಅಂಬಿಗರ ಚೌಡಯ್ಯ

ಈಶ್ವರನನ್ನು ಕಾಂಬುದು ಒಂದು ಆಶೆಯುಳ್ಳೊಡೆ
ಪರದೇಶಕ್ಕೆ ಹೋಗಿ ಬಳಲದಿರು
ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ
ನಿನ್ನಲ್ಲಿ ನೀ ತಿಳಿದು ನೋಡಾ
ಜಗವು ನಿನ್ನೊಳಗೆ ಎಂತಾದ ಅಂಬಿಗರ ಚೌಡಯ್ಯ

ಉಚ್ಚೆಯ ಬಚ್ಚಲಲಿ ಹುಟ್ಟಿ
ನಾ ಹೆಚ್ಚು ನೀ ಹೆಚ್ಚು ಎಂಬುವವರನ್ನು
ಮಚ್ಚಿಲೆ ಹೊಡೆಯೆನ್ದ ಅಂಬಿಗರ ಚೌಡಯ್ಯ