Thursday, March 20, 2014

ಈ ಬಸವರಾಜು

ಈ ಬಸವರಾಜು ಕಳೆದ 25 ವರ್ಷಗಳಿಂದ ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತ. 'ಭಾರತ ಜನ ವಿಜ್ಞಾನ ಜಾಥಾ'ದಿಂದ ಪ್ರೇರಿತಗೊಂಡ ಅವರು ಮುಂದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕಗಳನ್ನು ಪ್ರಾರಂಭಿಸಿದರು. ನಂತರ 'ಭಾರತ ಜ್ಞಾನ ವಿಜ್ಞಾನ ಸಮಿತಿ'ಯ ಕರ್ನಾಟಕ ಶಾಖೆಯ ಪದಾಧಿಕಾರಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡರು. ಇದೀಗ 'ಭಾರತ ಜ್ಞಾನ ವಿಜ್ಞಾನ ಸಮಿತಿ'ಯಿಂದ ಹೊರಬಂದಿರುವ ಅವರು 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ' ಎಂಬ ಹೊಸ ಸಂಘಟನೆಯನ್ನು ಕಟ್ಟಿದ್ದಾರೆ. 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ'ಯ ವತಿಯಿಂದ 'ಶಿಕ್ಷಣ ಶಿಲ್ಪಿ' ಎಂಬ ಶೈಕ್ಷಣಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಮಕ್ಕಳಿಗಾಗಿ 'ಪಟಾಕಿ' ಹಾಗೂ 'ಅಸಾಮಾನ್ಯರ ಜೀವನದ ಸ್ವಾರಸ್ಯಗಳು' ಎಂಬ ಪುಸ್ತಕಗಳನ್ನು ರಚಿಸಿರುವ ಅವರು 'ಡಾ. ಎಚ್. ಎಸ್. ದೊರೆಸ್ವಾಮಿ' ಎಂಬ ಕೃತಿಯನ್ನೂ ರಚಿಸಿದ್ದಾರೆ.