Thursday, October 31, 2013

ರಾಜ್ಯೋತ್ಸವ ಪ್ರಶಸ್ತಿ

2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಕೋ.ಚೆನ್ನಬಸಪ್ಪ ಅವರಿಗೆ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪಿ.ಕಾಳಿಂಗರಾಯರೊಂದಿಗೆ ಹಾಡುತ್ತಿದ್ದ ಸೋಹನ್ ಕುಮಾರಿ ಅವರಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸೂಲಗಿತ್ತಿ ನರಸಮ್ಮನವರಿಗೆ ರಾಷ್ಟ್ರೀಯ ಹಿರಿಯ ನಾಗರಿಕ ಪ್ರಶಸ್ತಿ ಬಂದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ಒಮ್ಮೆ ಎಂ.ಪಿ.ಪ್ರಕಾಶ್ ಅವರು ರಾಮಕೃಷ್ಣ ಹೆಗಡೆ ಅವರ ಬಳಿ ಕುವೆಂಪು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಾರದಿರುವ ಸಂಗತಿಯನ್ನು ಪ್ರಸ್ತಾಪಿಸಿದರಂತೆ. ಆಗ ಹೆಗಡೆಯವರು, "ಯಾರಿಗೂ ಹೇಳಬೇಡಿ. ಈಗಾಗಲೇ ಅವರಿಗೆ ಎಂಥೆಂಥದೋ ಪ್ರಶಸ್ತಿಗಳೆಲ್ಲ ಬಂದಿವೆ. ಈಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಸರಿಯಾಗುವುದಿಲ್ಲ" ಎಂದರಂತೆ.

No comments:

Post a Comment