Monday, February 24, 2014

ತೇಜಸ್ವಿ ಮತ್ತು ಪ್ರಶಸ್ತಿ

  1. ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದಿಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು press meetನಲ್ಲಿ ಹೇಳಿದ್ದು: ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು ಎಂದರು.
  2. ವಿವೇಕ ರೈರವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ ಮಾಡಿದರು. ರೈಯವರು ಮನೆಗೇ ಬಂದು ಕೂತು ಕೇಳಿಕೊಂಡರು. ಇವರು ಸ್ವೀಕರಿಸಲೊಪ್ಪಲಿಲ್ಲ.
  3. ಮೈಸೂರು ವಿಶ್ವವಿದ್ಯಾನಿಲಯ 2004 ಜ. 22ರಂದು ನಡೆದ ಘಟಿಕೋತ್ಸವದಲ್ಲಿ ಆರ್.ಕೆ.ಲಕ್ಷ್ಮಣ್, ಎಚ್.ವೈ.ಶಾರದಾ ಪ್ರಸಾದ್, ಜಿ.ಎಸ್.ಶಿವರುದ್ರಪ್ಪ ಹಾಗೂ ತೇಜಸ್ವಿಗೂ ಗೌರವ ಡಾಕ್ಟರೇಟು ಕೊಡಲು ತೀರ್ಮಾನಿಸಿತ್ತು. ಆದರೆ ತೇಜಸ್ವಿ ಆ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದರು.
  4. 2005ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದವರೂ ಗೌರವ ಡಾಕ್ಟರೇಟು ಪದವಿ ಕೊಡುತ್ತೇವೆಂದರು. ಇವರು ಒಪ್ಪಿಕೊಳ್ಳಲಿಲ್ಲ.                                                          - ರಾಜೇಶ್ವರಿ, 'ನನ್ನ ತೇಜಸ್ವಿ' ಪು. 495-6