Saturday, October 16, 2021

ಜಿ.ಕೆ. ಗೋವಿಂದರಾವ್‌

 ಜಿ.ಕೆ. ಗೋವಿಂದರಾವ್‌ ಅವರು ಚಿಂತಕ, ನಟ ಹಾಗೂ ಕನ್ನಡ ಬರಹಗಾರ. ಅವರು ಬೆಂಗಳೂರಿನ ಸಂತ ಜೋಸೆಫ್‌ ವಾಣಿಜ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದರು. ಅವರು ತಮ್ಮ ಜೀವಿತದ ಕೊನೆಯವರೆಗೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು.

ಸಾಹಿತ್ಯ ಕೃಷಿ

ಪ್ರಸಿದ್ಧ ಬರಹಗಾರರಾಗಿದ್ದ ಅವರು ಕೆಳಕಂಡ ಕೃತಿಗಳನ್ನು ರಚಿಸಿದ್ದರು.

  1. ಈಶ್ವರ ಅಲ್ಲಾ

  2. ಷೇಕ್ಸ್ಪಿಯರ್:‌ ಎರಡು ನಾಟಕಗಳ ಅಧ್ಯಯನ

  3. ನಡೆ ನುಡಿ

  4. ನಾಗರಿಕತೆ ಮತ್ತು ಅರಾಜಕತೆ

  5. ಬಿಂಬ ಪ್ರತಿಬಿಂಬ

  6. ಮನು ವರ್ಸಸ್‌ ಅಂಬೇಡ್ಕರ್‌

  7. ಗಾಂಧೀಜಿಯ ಉಪವಾಸಗಳು

ನಟನೆ

ರಂಗಭೂಮಿಯ ನಟ ಹಾಗೂ ನಿರ್ದೇಶಕರಾಗಿದ್ದ ಅವರು ʼಕಥಾ ಸಂಗಮʼ, ʼಗ್ರಹಣʼ, ʼಬಂಧನʼ, ʼಮಹಾಪರ್ವʼ, ʼಜಗತ್‌ ಕಿಲಾಡಿʼ, ʼಲಾಕಪ್‌ ಡೆತ್‌ʼ ಮೊದಲಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಜನಪ್ರಿಯ ಟಿ.ವಿ. ಧಾರಾವಾಹಿ ʼಮಾಲ್ಗುಡಿ ಡೇಸ್‌ʼನಲ್ಲಿ ಕೂಡ ನಟಿಸಿದ್ದರು.

ಮರಣ

ಗೋವಿಂದರಾವ್‌ ಅವರು ದಿನಾಂಕ ೧೫-೧೦-೨೦೨೧ರಂದು ತಮ್ಮ ೮೪ನೇ ವಯಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು.

No comments:

Post a Comment